
ಕುಲಗೋಡ: ಈ ದಿನ ಗ್ರಾಮದ ಶ್ರೀ ಲಕ್ಷ್ಮಿದೇವಿ ದೇವಸ್ಥಾನ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಶಿಬಿರವನ್ನು ಲಕ್ಷ್ಮೀ ರೈತ ಉತ್ಪಾದಕರ ಸಂಸ್ಥೆ ಮತ್ತು ಶ್ರೀ ಗೋವಿಂದ ಬಿ. ಕೊಪ್ಪದ (ಜಿಲ್ಲಾ ಪಂಚಾಯಿತಿ ಸದಸ್ಯರು – ಯಾದವಾಡ) ಮತ್ತು ಜಯಸಿಂಗಪೂರದ ಪಾಯೋಸ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.

ಸಮಾರಂಭದ ಉದ್ಘಾಟನೆಗೆ ಹಲವು ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಗೋವಿಂದ ಕೊಪ್ಪದ, ಗ್ರಾಮದ ಹಿರಿಯರಾದ ರಾಚಪ್ಪ ಅಂಗಡಿ, ಗ್ರಾಮ ಪಂಚಾಯತಿ ಸದಸ್ಯರಾದ ಸತೀಶ ಒಂಟಗೋಡಿ, ಪ್ರಕಾಶ ಬೀಸನಕೊಪ್ಪ, ಅಶೋಕ ಪೂಜಾರಿ, ಕಿಷ್ಟಪಾ ಬಿಸನಕೊಪ್ಪ, ಆನಂದ್ ಗೋಕಾವಿ, ದುಂಡಪ್ಪ ಇಟ್ನಾಳ, ಹನುಮಂತ ಲಕ್ಕಾರ, ಶಶಿಕಾಂತ ನಾಯಿಕ, ಶಾಸಪ್ಪಗೌಡ ಪಾಟೀಲ ಮತ್ತು ರಂಗಪ್ಪಗೌಡ ಅರಳಿಮಟ್ಟಿ ಸೇರಿದಂತೆ ಶಿಕ್ಷಕರಾದ ಸುರೇಶ ತಳವಾರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಶಿಬಿರದ ಮೂಲಕ ಕುಲಗೋಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಉಚಿತವಾಗಿ ಆರೋಗ್ಯ ತಪಾಸಣೆ ಹಾಗೂ ಸಲಹೆಗಳು ನೀಡಲಾಯಿತು. ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಶಿಬಿರವು ಪ್ರಭಾವಿ ಹೆಜ್ಜೆಯಾಗಿದೆ.

ಅದೇ ರೀತಿ, ಗ್ರಾಮೀಣ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಶ್ರೀ ಗೋವಿಂದ ಕೊಪ್ಪದ ಅವರ ಸೇವೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರವನ್ನು ಗ್ರಾಮಸ್ಥರು ಅಭಿನಂದಿಸಿದರು. ಇಂತಹ ಆರೋಗ್ಯ ಶಿಬಿರಗಳು ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತವೆ ಹಾಗೂ ಸಮರ್ಥ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತವೆ.
ಗ್ರಾಮೀಣ ಭಾಗದ ಜನತೆಗೆ ಇದು ಸಂತಸದ ಕ್ಷಣವಾಗಿದ್ದು, ಆರೋಗ್ಯದ ಕಡೆಗೆ ಮತ್ತಷ್ಟು ಗಮನ ಹರಿಸುವ ಪ್ರೇರಣೆಯಾಗಿದೆ.